ರಂಗವಲ್ಲಿ

ತಿಕ್ಕಿ ತೀಡಿ ಕಸಗುಡಿಸಿ
ನೀರೆರೆಚಿ ಹದ ಮಾಡಿ ಮಣ್ಣು
ಬಿಳುಪು ನುಣ್ಣಗಿನ ರಂಗೋಲಿ ಹಿಟ್ಟು
ತೋರು-ಹೆಬ್ಬೆರಳಿನ ಮಧ್ಯೆ
ನಾಜೂಕು ಬೊಟ್ಟು!

ಚುಕ್ಕೆ ಚುಕ್ಕೆಗಳ ಎಣಿಸಿ
ಸಮಾನಾಂತರದಿ ಬಿಡಿಸಿ
ಆಚೀಚೆ ರೇಖೆ ಜಾರದಂತೆ ಒರೆಸಿ
ಒಂದಿನಿತೂ ಲೆಕ್ಕ
ತಪ್ಪುವಂತಿಲ್ಲ ಇಲ್ಲಿ.

ಚಿತ್ತ ಚಿತ್ತಾರವಾಗಿ
ಮನದೊಳಗೇ ಕುಳಿತು
ಶಿಲ್ಪ ಕುಟ್ಟುತ್ತಿದ್ದ ಮರಕುಟಿಗ
ಚಿತ್ತವನ್ನೇ ಚಿತ್ರವಾಗಿಸಿ
ಹಾದಿಬೀದಿಯವರ ಕಣ್ಣರಳಿಸಿ
ಕಣ್ಣಿರುವವರ ಮನವರಳಿಸಿ
ನಲಿಸಿ-ನಗಿಸಿದ ರಂಗವಲ್ಲಿ

ಹೊತ್ತು ಏರಿದಂತೆಲ್ಲಾ
ಕಣ್ಣಿದ್ದೂ ಇಲ್ಲದವರ ಕಾಲ್ತುಳಿತಕ್ಕೆ ಸಿಕ್ಕು
ಸತ್ತು ಸುಣ್ಣವಾಗಿ
ಕದಡಿದ ಅಸ್ಪಷ್ಟ ರೇಖೆಗಳ
ವಿಕಾರ ರೂಪವಾಗಿ
ಹೊರ ಹರಿಯದ ಬಿಕ್ಕು!

ಮಣ್ಣೊಳಗೆ ಹದ ಕಲಸಿದ
ಕಣ್ಣೀರಾಗಿ ಬೆರೆತು
ಅವರಿವರ ಅಡಿಗಳ
ಕೆಳಗೆ ಹೂತು
ಅನಾಥವಾಗಿ ಮರೆಯಾಗುತ್ತದೆ
ಸೋತು!
ಆದರೂ
ನಾಳೆಗೆ ಮತ್ತೆ ಹೊಸತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ + ಏಜು
Next post ನಾನು ನಾನೇ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys